ಶಿವಮೊಗ್ಗ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (SPBL) ಸೀಸನ್–3 ಆಗಸ್ಟ್ 16ರಂದು ನಡೆಯಲಿದೆ ಎಂದು ಲೀಗ್ ಅಧ್ಯಕ್ಷ ಕುಮರೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬ್ಯಾಡ್ಮಿಂಟನ್ ಕ್ರೀಡೆಯು ದೈಹಿಕ ಸದೃಢತೆ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆಗೆ, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಯುವ ಸಮುದಾಯವನ್ನು ಬ್ಯಾಡ್ಮಿಂಟನ್ ಕ್ರೀಡೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು ಲೀಗ್ನ ಉದ್ದೇಶವಾಗಿದ್ದು, ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಮರೇಶ್ ಕರೆ ನೀಡಿದ್ದಾರೆ.
ಆಗಸ್ಟ್ 16ರಂದು ಸೀಸನ್–3ಕ್ಕೆ ಚಾಲನೆ
ಆಗಸ್ಟ್ 16ರ ಬೆಳಿಗ್ಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಸೀಸನ್–3ಕ್ಕೆ ಚಾಲನೆ ದೊರೆಯಲಿದೆ.
ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಹಾಪ್ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಂಜನೇಯ ಇಂಜಿನಿಯರ್ ವರ್ಕ್ಸ್ ಮಾಲೀಕ ಕುಮರೇಶ್ ವಹಿಸಲಿದ್ದಾರೆ.
ಲೀಗ್ಗೆ ಎಂ.ಡಿ. ಪಾಂಡುರಂಗ ಮುಖ್ಯ ಪ್ರಾಯೋಜಕರಾಗಿದ್ದು, ಪರಮೇಶ್ವರ, ರೇಖ್ಯಾನಾಯ್ಕ, ಸುಧಾಕರ್ ಬಿಜ್ಜೂರ್, ಉಮೇಶ್ ಎಂ., ಹರೀಶ್, ಸತೀಶ್ ಹಾಗೂ ಡಾ. ನವೀನ್ ನಾಗರಾಜ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಗರದ ಯುವಕರು ಹಾಗೂ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಲೀಗ್ಗೆ ಪ್ರೋತ್ಸಾಹ ನೀಡಬೇಕು ಎಂದು ಕುಮರೇಶ್ ಮನವಿ ಮಾಡಿದ್ದಾರೆ.



More Stories
ಶಿವಮೊಗ್ಗದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾಪಟುಗಳ ನೋಂದಣಿಗೆ ಆಹ್ವಾನ
ಶಿವಮೊಗ್ಗದಲ್ಲಿ ನಳಂದ ಚೆಸ್ ಅಕಾಡೆಮಿ ಚೆಸ್ ಟೂರ್ನಿ ಯಶಸ್ವಿ: ವಿವಿಧ ವಿಭಾಗಗಳಲ್ಲಿ ಬಾಲಕ-ಬಾಲಕಿಯರ ಸಾಧನೆ
All you need to know about penalty shootouts