ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆ ಹಾಗೂ ಬಿ.ವೈ. ರಾಘವೇಂದ್ರ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರರಾದ ಯುವ ನಾಯಕರಾದ ಬಿ.ಆರ್. ಸುಭಾಷ್ ಮತ್ತು ಬಿ.ಆರ್. ಭಗತ್ ಉದ್ಘಾಟಿಸಿ, ಯುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಕ್ರೀಡಾಪಟುಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಯುನೈಟೆಡ್ ಶಿವಮೊಗ್ಗ ತಂಡಕ್ಕೆ ಪ್ರಶಸ್ತಿ
ಪಂದ್ಯಾವಳಿಯಲ್ಲಿ ಯುನೈಟೆಡ್ ಶಿವಮೊಗ್ಗ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನವಾಗಿ ₹20,000 ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ರಿಪ್ಪನ್ಪೇಟೆಯ ಸಿದ್ಧಿವಿನಾಯಕ ತಂಡ ದ್ವಿತೀಯ ಬಹುಮಾನ ಪಡೆದರೆ, ಮಿಶಾ ತೀರ್ಥಹಳ್ಳಿ ತಂಡ ತೃತೀಯ ಬಹುಮಾನ ಪಡೆದುಕೊಂಡಿತು. ಶಿವಮೊಗ್ಗ ಗ್ರಾಮಾಂತರ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಐಡಿಯಲ್ ಗೋಪಿ, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಶಶಿ, ವಿಜಯ್, ಸಚಿನ್ ಪೂಜಾರಿ, ಡಾ. ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ದೊರೆಯಿತು.



More Stories
ಶಿವಮೊಗ್ಗಕ್ಕೆ ಶರಣ್ ಪಂಪ್ವೆಲ್ ಪ್ರವೇಶಕ್ಕೆ 10 ದಿನ ನಿರ್ಬಂಧ; ಜಿಲ್ಲಾಧಿಕಾರಿಯಿಂದ ಆದೇಶ
ಬೋರ್ವೆಲ್ ಕೇಬಲ್ ಕದಿಯುತ್ತಿದ್ದ ನಾಲ್ವರು ಬಂಧನ; ₹25 ಸಾವಿರ ಮೌಲ್ಯದ ವಸ್ತುಗಳು, ಕಾರು ಜಪ್ತಿ
ಶಿವಮೊಗ್ಗದಲ್ಲಿ ಯುವಕ ನೇಣಿಗೆ ಶರಣು-Young man is no more in shimoga