ಬೆಂಗಳೂರು: ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನಟಿ ರಿಷಿಕಾ ಸಿಂಗ್ ಮಾಡಿರುವ ರೀಲ್ಸ್ವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಶ್ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದ ವಿಚಾರವನ್ನು ಉಲ್ಲೇಖಿಸಿರುವ ರಿಷಿಕಾ, ‘ಹೆಂಡ್ತಿ ಇಲ್ಲದೇನೇ ಟೆಂಪಲ್ ರನ್ ಯಾಕೆ?’ ಎಂಬ ರೀತಿಯಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಮುನ್ನ ಧರ್ಮಸ್ಥಳಕ್ಕೆ ತೆರಳಿದ್ದ ಯಶ್, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು. ಬಳಿಕ ಸಮೀಪದ ಸೂರ್ಯ ಸದಾಶಿವ ರುದ್ರ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯಶ್ ಒಂಟಿಯಾಗಿ ದೇವಸ್ಥಾನಕ್ಕೆ ತೆರಳಿದ್ದ ವಿಚಾರ ಇದೀಗ ರಿಷಿಕಾ ಸಿಂಗ್ ಅವರ ಹೊಸ ರೀಲ್ಸ್ನಲ್ಲಿ ಪ್ರಸ್ತಾಪವಾಗಿದೆ.
ರಿಷಿಕಾ ಸಿಂಗ್ ತಮ್ಮ ರೀಲ್ಸ್ನಲ್ಲಿ, ‘ಎಕ್ಸಾಂ ಬರ್ದಾಗಾಯ್ತು. ಈಗ ಮಾರ್ಕ್ಸ್ ಕೊಡ್ತಾರೆ ನೋಡೋಣ ಎಷ್ಟಂತ, ಆದ್ರೂ ಹೆಂಡ್ತಿ ಇಲ್ದೇ ಟೆಂಪಲ್ ರನ್ ಯಾಕೆ?’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ‘ಗೃಹಸ್ಥನಿಗ್ಯಾಕೆ ಸನ್ಯಾಸಿ ವರ್ತನೆ?’ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
https://www.instagram.com/reels/DceDenvSdUz/
ರಿಷಿಕಾ ಅವರ ಈ ಮಾತುಗಳು ಯಶ್ ಅವರ ಧರ್ಮಸ್ಥಳ ಭೇಟಿಯನ್ನು ನೇರವಾಗಿ ಉಲ್ಲೇಖಿಸುತ್ತಿವೆಯೇ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಆದರೆ ರೀಲ್ಸ್ನಲ್ಲಿ ಅವರು ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಹೇಳದೆ ವ್ಯಂಗ್ಯಾತ್ಮಕವಾಗಿ ಮಾತನಾಡಿರುವುದು ಕಂಡುಬರುತ್ತದೆ.
‘ಟಾಕ್ಸಿಕ್’ ಬಗ್ಗೆ ಚರ್ಚೆ ನಡುವೆಯೇ ವೈರಲ್ ಆದ ರೀಲ್ಸ್
ಈ ಹಿಂದೆ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಕುರಿತು ರಿಷಿಕಾ ಸಿಂಗ್ ಮಾಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟ್ರೇಲರ್ನಲ್ಲಿ ಯಶ್ ಅವರ ಲುಕ್ ಕುರಿತು ಅವರು ಟೀಕಾತ್ಮಕವಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳಿಂದಲೂ ವಿರೋಧ ವ್ಯಕ್ತವಾಗಿತ್ತು.
ಇದೀಗ ‘ಟಾಕ್ಸಿಕ್’ ಬಿಡುಗಡೆಯ ಬಳಿಕ ಚಿತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ರಿಷಿಕಾ ಅವರ ಹೊಸ ರೀಲ್ಸ್ ವೈರಲ್ ಆಗಿದೆ.
‘ಕರ್ಮ ಕಾಣಲ್ಲ, ಕಾಡದೆ ಬಿಡಲ್ಲ’ ಎಂದ ರಿಷಿಕಾ
ಇದರ ಬೆನ್ನಲ್ಲೇ ರಿಷಿಕಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಿಜ ಹೇಳುವುದು ನಮ್ಮ ಧರ್ಮ, ಅದನ್ನು ಅರ್ಥ ಮಾಡಿಕೊಳ್ಳುವುದು ಬಿಡುವುದು ನಿಮ್ಮ ಖರ್ಮ. ಕರ್ಮ ಕಾಣಲ್ಲ, ಕಾಡದೆ ಬಿಡಲ್ಲ. ಸತ್ಯಕ್ಕೆ ಸೋಲಿಲ್ಲ’ ಎಂಬ ಸಂದೇಶವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಜತೆಗೆ ವೀರನಾರಿ ಶೈಲಿಯ ಪೋಸ್ನಲ್ಲಿರುವ ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್
ರಿಷಿಕಾ ಸಿಂಗ್ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ. ‘ಮುತ್ತಿನ ಹಾರ’, ‘ಬಂಧನ’ ಸೇರಿದಂತೆ ಹಲವು ಗಮನಾರ್ಹ ಚಿತ್ರಗಳನ್ನು ನಿರ್ದೇಶಿಸಿರುವ ರಾಜೇಂದ್ರ ಸಿಂಗ್ ಬಾಬು ಅವರ ಕುಟುಂಬ ಚಿತ್ರರಂಗದೊಂದಿಗೆ ದೀರ್ಘಕಾಲದ ನಂಟು ಹೊಂದಿದೆ.
ರಿಷಿಕಾ ಸಿಂಗ್ ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಆದಿತ್ಯ ಅವರ ಸಹೋದರ.
ರಿಷಿಕಾ ಅವರ ಇತ್ತೀಚಿನ ಹೇಳಿಕೆಗಳು ಮತ್ತೆ ಯಶ್ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರ ನಡುವೆ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.



More Stories
ನೇಪಾಳ ಪ್ರವಾಸದಲ್ಲಿದ್ದ ಶಿವಮೊಗ್ಗದ 56 ಮಂದಿ ಪ್ರವಾಸಿಗರು ಸುರಕ್ಷಿತ
ಅಂತರರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಡಾ. ಶರತ್ ಸಂಗನಗೌಡರ್ ಅವರಿಗೆ ಪ್ರಶಸ್ತಿ
ಶಿವಮೊಗ್ಗದಲ್ಲಿ ಹೆಚ್1ಎನ್1 ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ: ಪರೀಕ್ಷೆ, ಚಿಕಿತ್ಸೆ ಉಚಿತ